Posts

Showing posts from 2009

ನಿಜ ಜೀವನದಲ್ಲಿ ಹಾಸ್ಯ : ಕಂಪನಿಯ ಹೆಸರಿನ ಗೊಂದಲ

ಭರತ್ - ನಮ್ಮ ಆಫೀಸ್ ನಲ್ಲಿ ನಮ್ಮ ಟೀಂ ನ ಒಂದು ಬೆನ್ನೆಲಬು. ಅವರದು ಒಂದು ವಿಶೇಷ ವ್ಯಕ್ತಿತ್ವ ಅಂದ್ರು ಅಡ್ಡಿ ಇಲ್ಲ :) ದೇವರಲ್ಲಿ ಆಪಾರ ನಂಬಿಕೆ, ಭಯ-ಭಕ್ತಿ ಮತ್ತು ವಿಶ್ವಾಸ್ ಉಳ್ಳವರು. ಯಾವುದೇ ಒಂದು ಒಳ್ಳೆಯ ಕಾರ್ರ್ಯ ಮಾಡಲು ಶುಭ ಗಳಿಗೆ ನೋಡುವುದು ಒಂದು ಅಭ್ಯಾಸ. ಚೀನಾ ದೇಶಕ್ಕೆ ಕೆಲಸದ ಮೇರೆ ಹೋಗಬೇಕಾದಾಗ ಅವರು ತಮ್ಮ ಗುರುಗಳ ಸಲಹೆ ತಗೊಂಡಿದ್ದು ಒಂದು ಸಣ್ಣ ಉದಾಹರಣೆ. ಮೊನ್ನೆ ನಮ್ಮ ಕಂಪನಿ ಹೆಸರು ಬದಲಾದಾಗ, ಭರತ್ ತಮ್ಮ ಗುರುಜಿಗೆ ಹೇಳಬಯಸಿದ್ದು ಒಂದು ಸ್ವಾರಸ್ಯಕರ ಸಂಗತಿಯಾಗಿತ್ತು. Jataayu (ಜತಾಯು) ಇವಾಗ Comviva (ಕಾಮವಿವ) ಅಂತ ಬದಲಾಯಿತು. ಜತಾಯು ಒಂದು ಭಾರತಿಯ ಹೆಸರಾಗಿದ್ದು ರಾಮಾಯಣ ದಲ್ಲಿ ಶ್ರೀ ರಾಮನಿಗೆ ಸೀತೆಯ ಅಪರಹಣದ ವಾರ್ತೆ ತಲುಪಿಸಿದ ಪ್ರತಿರೂಪ. ಅದೇ ಕಾಮವಿವ Com - communication Viva - Life Communication is Life ಅಂತ ಬದಲಾದರೂ..ಕನ್ನಡದಲ್ಲಿ ಕಾಮವಿವ ಅಂತ ಉಳಿತು. ಭರತ್ ಇದನ್ನು ತಮ್ಮ ಗುರುಜಿಗೆ ಮೊಬೈಲ್ ನಲ್ಲಿ ಹೇಳಿದಾಗ.. ಭರತ್: "ಗುರುಜಿ, ನಮ್ಮ ಕಂಪನಿ ಹೆಸರು ಬದಲಾಯಿತು. Jataayu ಹೋಗಿ Comviva ಆಯಿತು" ಗುರುಜಿ: "ಏನಯ್ಯಾ ಭರತ್, ಅದೆಂತ ಹೆಸರಿದು "ಕಾಮ ವಿವಾಹ !! ಛೆ ಛೆ " ಎಂದು ಗುರುಜಿ ಹೌಹಾರಿದರು. ಇದನ್ನು ಅರಿತ ಭರತ್ ಮತ್ತೆ ಗಡಿಬಿಡಿಸಿ "ಇಲ್ಲಾ ಗುರುಜಿ, ಅದು Comviva ಹೊರತು ಕಾಮ ವಿವಾಹ ಅಲ್ಲ ಅಂತ ಒತ್ತಿ ಹೇ

ಅಂದಿನ ಚುಟುಕುಗಳ ಓಟ

ಅಕ್ಟೋಬರ್ ೧೯೯೮ ಪ್ರೀತಿಗೆ ಭಯ !! ಹೂವು ಮುಡಿಬೇಕಾದ್ರ , ಮುಳ್ಳಿನ ಭಯ ಜೇನು ಸವಿಬೇಕಂದ್ರ,, ಜೇನು ಹುಳಗಳ ಭಯ ನಿನ್ನ ಪ್ರೀತಿಸ್ಬೇಕಂದ್ರ , ನಿಮ್ಮಪ್ಪನ ಭಯ ಜಾರಿ ಬಿದ್ದ ಮಳೆಯ ಕಿಚಿ-ಪಿಚಿ ಕೆಸರಲಿ ಎಂದು ಬೀಳದ ಚೋರ ಬಿದ್ದನು ವಿಶಾಲವಾದ ದಾರಿಯಲಿ - ಜೋರ ಕಾಲ್ಜಾರಿಯಲ್ಲ ಗೆಳತಿ, ಇಗೋ ನೋಡಿ ನಿನ್ನ ಈ ಸೌಂದರ್ಯ್ಯವನ್ನು ಮನೆ-ಮನೆ ಮನೆ-ಮನೆಗೋ ರಾಜ-ಕಾರಣಿಗಳು ಹೋಗ್ತಾರ ವೋಟು ಕೇಳಾಕ್, ಆದ್ರ ನಮ್ಮ ರಾಜ್-ನಿಗೋ ಹೋಗಬೇಕೈತು ಹೆಣ್ಣು ಕೇಳಾಕ್ ; ಅಕ್ಕ - ತಂಗಿ ನಿಂಬೆ ಗಿಂತ ಮೂಸಂಬಿಯೇ ಚೆನ್ನ, ಗೆಳತಿ ನಿನ್ ಗಿಂತ ನಿನ್ನ ಅಕ್ಕಾನೆ ಚೆನ್ನ ; -ಮಯುರ

ನಾ ನಿನ್ನಲ್ಲಿ ಚಂದ್ರನ ಕಂಡೆ

ಓ ಗುಲಾಬಿ, ಇಗೋ ನಿನ್ನ ಭಾವನೆಗೆ , ಸಮರ್ಪಿಸುವೆ ನನ್ನ ಕವನ. ನೀ ಆಗಸದಲಿ ಚಂದ್ರನ ಕಂಡಂತೆ, ನಾ ನಿನ್ನಲ್ಲಿ ಚಂದ್ರನ ಕಂಡೆ. ಜಗವೆಲ್ಲ ಕೋಪದಿ ಮುಳುಗಿರಲು, ಓ ಚಂದಮಾಮ, ಕಂಡೆಯಾ ಪ್ರೀತಿನ ? ಆದರೂ ನೀನು ದೂರದ ಶೀತ , ಮರೆತಿಲ್ಲ ನಾ ನಿನ್ನ ಶ್ವೇತ ; ನಿನ್ನ ಕಂಡು ಒಮ್ಮೆ ಮಾತು ಮೌನವಾದಿತು , ಇನ್ನೊಮ್ಮೆ ಮೌನ ಮಾತೈತು ; ನೀ ನನ್ನ ಜೊತೆ ಏಂದು ನಾ ಹೇಳಲು ; ಲೋಕವೇ ನಕ್ಕು ಅಂತು ಅಯ್ಯೋ ಮರಳು ; ಓ ಚಂದ್ರ ಕಂಡಿರುವೆ ಪ್ರೀತಿ , ತಾಳ್ಮೆ ನಿನ್ನಲ್ಲಿ , ನಿನ್ನ ಛಾಯೆಯೇ ನನ್ನ ಬಾಳಲಿ ; -ಮಯೂರ

ಮನದ ಅರಸಿ

ಓ ಅರಸಿ, ಮನದಲೇನೋ ತವಕಾ, ಆಗುವೆ ನಾನು ಕೆಲವೊಮ್ಮೆ ಭಾವುಕ ; ಯಾರಿಗೆ ಹೇಳಲಿ, ಏನಂತ ಹೇಳಲಿ, ಬದುಕನು ಬಳಸಿ - ಉಳಿಸಿ ಇತಿಹಾಸದ ಪುಟದಲಿ ; ಒಮ್ಮೆ ಮುಗುಳ್ನಕ್ಕು , ಇನ್ನೊಮ್ಮೆ ಒಬ್ಬಂಟಿ ಅತ್ತು , ಒಮ್ಮೆ ಬಾನಲ್ಲಿ ಹಾರಾಡಿ , ಇನ್ನೊಮ್ಮೆ ಭುವಿಯಲ್ಲಿ ಬಚ್ಚಿಟ್ಟು ; ಜೀವನದ ಪಯಣ ಸುಂದರ್ ವೆಂದಾಗ , ದುಃಖದ ಹೊಳೆ ಇಗೋ ನೋಡು ನನ್ನ , ಏಂದು ಮೂಗು ಮುರಿದಾಗ ; ಹೊತ್ತು ಹೊರಟಿದ್ದೆ ...ಹಳೆಯ ನೆನಪುಗಳ ಸಂತೆ, ಅರಿತರೂ ಅದಲ್ಲ ನನ್ನ ಜೀವನದ ಮೂಟೆ ಕಂತೆ ; ಗೆಲ್ಲುವ ಛಲದಲ್ಲಿ ಮರಿತೆ ಆಡುವ ಆಟ , ಓ ಅರಸಿ - ಕಲಿಸುತಿರುವೆ ನೀ ದಿನಕ್ಕೊಂದು ಪಾಠ , ಅರಿತೆ ನಾನು ನನ್ನ ಮನವಾ ಅಂದುಕೊಂಡೆ, ಮನದ ಅಡಿಯಲಿ ನನ್ನೇ ಕಳೆದುಕೊಂಡೆ, ಓ ಅರಸಿ - ಅರಸುತ ನಿನ್ನ, ಲೋಕವೆಲ್ಲಾ , ಕೊನೆಗೂ ಕಂಡು ಕೊಂಡೆ ಪ್ರತಿ ಕ್ಷಣದಲ್ಲಿ -ಈ ಬದುಕೆಲ್ಲ ; --ಮಯೂರ